Tuesday, January 15, 2013

ಹಳ್ಳಿಯ ಹುಡುಗಿಯ ಮುಗ್ದ ಪ್ರೀತಿ......


ಹಳ್ಳಿಯ ಹುಡುಗಿಯ ಮುಗ್ದ ಪ್ರೀತಿ......









ಅವಳು ಹುಟ್ಟಿ ಬೆಳೆದಿದ್ದು ಎಲ್ಲಾನೂ ಹಳ್ಳಿಯಲ್ಲೆ ಆ ಹಳ್ಳಿಯ ಜೀವನ ಇಂದಿಗೂ ಎಂದೆಂದಿಗೂ ಅವಿಸ್ಮರಣೀಯವಾದದ್ದು.ಅವಳು ಬೇಳೆದಿದ್ದು ಒಂದು ಬಡ ಕುಟುಂಬದಲ್ಲಿ.ಅವಳ ಮನೆಯಲ್ಲಿ ಒಬ್ಬ ತಮ್ಮ ,ಅಪ್ಪ ಅಮ್ಮ ಮತ್ತು ಇವಳಿಗೋಬ್ಬಳು ಅಕ್ಕತುಂಬಾನೆ ಸಂಪ್ರದಾಯಸ್ಥ ಕುಟುಂಬ.ಬಡವರಾದರು ಹೊಟ್ಟೆ ಬಟ್ಟೆಗೆ ಏನು ತೊಂದರೆ ಇರಲಿಲ್ಲ.ಸಂಭದಿಕರ ಜೋತೆಯಾಗಲಿ ಸ್ನೇಹಿತರ ಜೋತೆಗಾಗಲಿ ಯಾರ ಹತ್ತಿರನೂ ಮಾತನಾಡದ ತುಂಬಾ ನಾಚಿಕೆ ಸ್ವಭಾವದ ಮುಗ್ದ ಹುಡುಗಿ.

ಅವಳು ಹೈಸ್ಕೂಲ್ ಗೆ ದಿನಾಲು ಆರು ಕೀಲೊಮೀಟರ್ ನಡೆದುಕೊಂಡು ಹೋಗಿ ಬರ್ತಾ ಇದ್ದಳು. ಒಂಬತ್ತನೇ ಕ್ಲಾಸ್ ನಲ್ಲಿ ಇದ್ದಾಗ ಅವಳ ಜೋತೆಗೆ ಅವಳ ಊರಿಂದ ಕೆಲವು ಮಂದಿ ಹುಡುಗ ಹುಡುಗಿಯರು ಜೋತೆಗೆ ಹೋಗುತ್ತಿದ್ದರು . ಇವಳುಶಾಲೆಗೆ ಹೋಗೊದು ಬರೋದು ಅಷ್ಟೆ ಮಾಡ್ತಾ ಇದ್ದಳು ಅದು ಬಿಟ್ಟು ಬೇರೆ ಏನು ವಿಷಯದ ಕಡೆ ಗಮನ ಹರಿಸುತ್ತಿರಲಿಲ್ಲ. ಹೀಗೆ ದಿನ ಕಳೆದಂತೆ ಅವಳಿಗೆ ಜೋತೆಯಲ್ಲಿ ಹೋಗುತ್ತಿದ್ದ ಓರ್ವ ಹುಡುಗನ ಪರಿಚಯವಾಯಿ.
ನಂತರ ಇಬ್ಬರಿಗೂ ಗಾಡವಾದ ಗೆಳತನವಾಗುತ್ತೆ. ಹಾಗೆ ಗೆಳತನ ಪ್ರೀತಿಗೆ ತಿರುಗಿ ಪ್ರೀತಿಸಲು ಪ್ರಾರಂಭಿಸುತ್ತಾರೆ.
 ಅವಳು 2nd ಪಿಯುಸಿ ಮುಗಿಸಿ ಮುಂದೆ ಓದುಲು ಆಸೆ ಅದರೆ ಅವರ ಮನೆಯಲಿ ಬಿಡದೆ ಮದುವೆ ಮಾಡಲು ಮುಂದಾಗುತ್ತಾರೆ. ಅವಳು ಮದುವೆಗೆ ಒಪ್ಪದೆ ಸಿಟಿಯಲ್ಲಿ ಇರುವ ಅವಳ ಅಕ್ಕ-ಬಾವನ ಮನೆಗೆ ಹೋಗುತ್ತಾಳೆ ಅಲ್ಲಯೆ ಒಂದು ಸಣ್ಣ ಕೆಲಸಕ್ಕೆ ಸೇರಿಸಿಕೋಳ್ಳುತ್ತಾಳೆ ಹಾಗೆಯೇ ಒಂದು ವರ್ಷ ಕಳಿಯುತ್ತೆ ಅಲ್ಲಿಯೆ ಕೆಲಸ ಮಾಡುವ ಹುಡಗ ಪ್ರೀತಿಸುವುದಾಗಿ ತಿಳಿಸುತ್ತಾನೆ ಆಗ ಬೇಸರಗೊಂಡು ಕೆಲಸ ಬಿಟ್ಟು ಹಳ್ಳಿಗೆ ವಾಪಸ್ಸಾಗುತ್ತಾಳೆ.  
ಮತ್ತೆ ಪ್ರೀಯತಮನ ಬೇಟಿ ಮಾಡಿ ಮದುವೆ ಬಗ್ಗೆ ಮಾತನಾಡಿ ಮದುವೆಯಾಗಲು ತಿಳುಸುತ್ತಾಳೆ ಜಾತಿ- ಬೇಧ ಎದುರಾಗುತ್ತೆ. ಇವರ ಇಬ್ಬರು ಪ್ರೀತಿಯ ಬಗ್ಗೆ ಇಬ್ಬರ  ಮನೆಯಲ್ಲೂ ತಿಳಿದು ಹುಡಿಗಿಗೆ ಮದುವೆ ಮಾಡಲು ಬೇರೆ ಕಡೆ ವರನನ್ನು ಹುಡುಕುತ್ತಾರೆ. ಆಗ  ಇವಳು ಪ್ರೀಯತಮನಿಗೆ ಹೋಗಿ ತನ್ನ ಮದುವೆ ಬಗ್ಗೆ ತಿಳುಹಿಸಿ, ಅವನು ಗಾಬರಿಗೊಂಡು ಅವನ ಮನೆಯಲ್ಲಿ ಮದುವೆಗೆ ಒಪ್ಪಿಗೆ ನೀಡಿ ಹುಡುಗಿಗೆ ತಿಳಿಸಲು ಹೇಳುತ್ತಾರೆ. ಅದರೆ ಜಾತಿ- ಬೇಧ ಹುಡುಗಿ ಮನೆಯಲ್ಲಿ ಒಪ್ಪುದಿಲ್ಲ ಬೇರೆ ವರನ ಜೋತೆ ಮದುವೆ ಮಾಡಲು ನಿಶ್ಚಯಿಸುತ್ತಾರೆ. ಇವಳ ಮದುವೆ ಸಮಯದಲ್ಲಿ ಎಲ್ಲಾರು ಮದುವೆ ಮಂಟಪಕ್ಕೆ ಹೋಗುವ ದಾರಿಯಲ್ಲಿ ಆಕಸ್ಮಿಕವಾಗಿ ಪ್ರೀಯತಮನ ಕಾರು ಎದುರು ಅಗುತ್ತೆ ಅದನ್ನು ಅವಳು ಕಾರಿನಲ್ಲಿ ಇರುವದನ್ನು ನೋಡಿ ಅವನು ಅವಳ ಗುಂಗಿನಲ್ಲೇ ಕಾರು ಒಡಿಸಿ ಬೇರೆ ಲಾರಿಗೆ ಡಿಕ್ಕಿ ಹೋಡೆದ್ದು ಅಪಘಾತವಾಗುತ್ತೆ. ಅಲ್ಲಿ ಮದುವೆ ಶಾಸ್ತ್ರ,ಇಲ್ಲಿ ಅವನ ಶಸ್ತ್ರಚಿಕಿತ್ಸೆ, ಅಲ್ಲಿ ಮದುವೆ ಸಡಗರ,ಇಲ್ಲಿ ಸುತಕದ ಚಾಯೇ  ಕೊನೆಗೂ ಅವಳ ಮದುವೆ ಅಗಿಯೇ ಹೋಯಿತ್ತು. ಇಲ್ಲಿ ಅವನು ಕೊನೆ ಉಸಿರು ಬಿಟ್ಟ.
 
 
 
 
 
 
ಅವಳ ಮದುವೆಯಾದ 9ತಿಂಗಳಿಗೆ ಗಂಡನ ಮನೆಯಿಂದ ತವರು ಮನೆಗೆ ಬರುತ್ತಾಳೆ ಎರಡು ದಿನ ಕಳಿದ ಮೇಲೆ ಅವಳು ಗಂಡನಿಗೆ ಅವಳ ತೋಟ ತೋರಿಸಲು ಕರೆದ್ಯೂತ್ತಾಳೆ. ಇವಳ ತೋಟಕ್ಕೆ ಹೋಗುವಾ ದಾರಿಯಲೇ ಪ್ರೀತಮನ ತೋಟವಿರುವುದು ಹಾಗೇ ಹೋಗುವಾಗ ಪ್ರೀಯತಮನ ಅತ್ತಿಗೆ ಎದುರು ಆಗುತ್ತಾರೆ ಅವಳು ಅಲ್ಲಿಯೆ ನಿಂತು.
ಮಾತು ಮುದುವರಿಸುತ ಆ ಕಡೆ ಈ ಕಡೆ ನೋಡುತ್ತಿರುವ ಸಮಯದಲ್ಲಿ ಒಂದು ಸಮಾಧಿ ಕಾಣ್ಣುತ್ತೆ ಅವಳು ಯಾರದು ಅದು ಸಮಾಧಿ ಅಂತ ಪ್ರಶ್ನಿಸಿದಳು. ಅದಕ್ಕೆ ಅವರು ನನ್ನ ಮೈದುನದೆಂದು ಉತ್ತರಸಿದರು ಹಾಗೆ ಏನಾಯಿತು! ಎಂದಳು ಅವರು ವಿವರವಾಗಿ ಹೇಳುತ್ತಿದಾಗೇ ಕುಸಿದು ಬಿದ್ದಳು. ಅದನ್ನು ಗಮನಿಸಿದ ಗಂಡ ಅವಳನ್ನು ಮನೆಗೆ ಕರೆದ್ಯೊದನು. ಆಗ ಅವಳಿಗೆ 5ತಿಂಗಳು ಗರ್ಭವತಿಯಾಗಿದ್ದಳು. ಅವಳು ಶಾಕ್ ನಿಂದ ಹೋರಬಾರಲೇ ಇಲ್ಲ.
ಅವಳು ಒಂದು ಮಗುವಿಗೆ ಜನ್ಮ ಕೋಟ್ಟಳು  ಅವಳು ಸ್ವಲ್ಪ ವಾಸ್ತವ ಸಿತ್ಥಿಗೆ ಬರುತ್ತಾಳೆ ಮಗುವಿಗೆ 3ತಿಂಗಳು ಆಗುತ್ತಿದಾಗೆ ಗಂಡನ ಮನೆಗೆ ಕಳುಹಿಸಿದರು.  ಆದರೆ ಅವಳು ಹಳೆಯ ವಿಷಯಗಳು ನೆನಪು ಮಾಡಿಕೊಂಡು ಮನಸ್ಸಿನಲ್ಲಿ ನೋವು, ವೇದನೆ, ದಃಖ ಪಡುತ್ತಾ ಅಳುತಿದ್ದಳು. ಸರಿಯಾಗಿ ಸಂಸಾರ ನಿಭಾಹಿಸುವುದಿಲ್ಲ ಇದನ್ನು ಗಮನಿಸಿದ ಗಂಡ ಇವಳು ಹುಚ್ಚಿಯೆಂದು ಅವಳ ತವರು ಮನೆಗೆ ಕಳುಹಿಸಿ, ಮತ್ತೆ ಎಂದಿಗೂ ಕರೆದ್ಯೂಯುವುದಿಲ್ಲ.
ಅಸಾಯಕ ಸಿತ್ಥಿಯಲ್ಲಿ ಇದ್ದಾ ಅವಳು ಮಗುವನ್ನು ಅಕ್ಕನ ಮನೆಯಲ್ಲಿ ಬಿಟ್ಟು, ಅವಳು ತವರು ಮನೆಯಲೇ ಈಗಲೂ ಹುಚ್ಚಿಯಾಗೆ ನಟನೆಮಾಡುತಾ ಇದ್ದಾಳೆ  ನೋಡಿ ವಿಧಯಾಟ ಇವಳ ಬಾಳು ಶೂನ್ಯವಾಗಿದೆ. ಪ್ರೀತಿಸಿದ ಪ್ರೀಯತಮ ಇಲ್ಲ, ಕಟ್ಟಿಕೊಂಡ ಗಂಡ ಇಲ್ಲ  ಈಗ ಅವಳು ಹೆತ್ತವರಿಗೆ ಭಾರವಾಗಿ ಇಂದಿಗೂ ಜೀವಂತವಾಗಿದ್ದಾಳೇ... ಇದು ಸತ್ಯ ಕಥೆ ಅವಳು 







ಇನ್ನೊ ಇದ್ದಾಳೇ ಇದನ್ನು .................................................................................................... ....................................................................................................................ಎಲ್ಲಾರು...













 ವಿಧಿಯಾಟ  ಅನುತ್ತಾರೆ.....................................................................................ನಿಜಾನಾ?





Saturday, January 12, 2013

ಮ್ವೆಸೂರು ಪ್ರವಾಸ


ನಾವು ಎಲ್ಲೋ ಇರುವ ಪ್ರವಾಸ ತಾಣಗಳನ್ನು ನೋಡಲು ಹೋಗುತ್ತಿವಿ, ಆದರೆ ನಮ್ಮ ಪಕ್ಕಾನೇ ಇರುವ ಮೈಸೂರನ್ನು ನಾವು ನೋಡೊಕೆ ಹೋಗುವುದಿಲ್ಲ. ಮೈಸೂರ್ ಅಕ್ಕ ಪಕ್ಕ ನೋಡಲು ತುಂಬಾ ಜಾಗಗಳು ಇವೆ
ಇದು ಆದಿ ಕಾಲದ ಕರ್ನಾಟಕದ ರಾಜಧಾನಿ ಆಗಿತ್ತು ಅನ್ನೋದು ನಮಗೆಲ್ಲಾ ಮರೆತೇ ಹೋಗಿದೆ ಅಲ್ವಾ ?

ಯೋಚನೆ ಮಾಡ್ಬೆಡಿ

ಈಗ ಬನ್ನಿ ಮ್ವೆಸೂರನ್ನ ನೋಡಿ
ಬರೋಣ.............................................................................................................

ಮ್ವೆಸೂರು ದಸರಾ ಎಷ್ಟೊಂದು ಸುಂದರಾ..............................

ಅಂದು ಭಾನುವಾರ ಎಲ್ಲರಿಗೂ ರಜಾ ಅಲ್ವಾ ,,,,,,,,,, ಅದಕ್ಕೆ ನಮ್ಮ ಮನೆಯವರೆಲ್ಲಾ ಸೇರಿ ಮ್ವೆಸೂರು ಪ್ರವಾಸ ಮಾಡಬೇಕೆಂದು ನಿರ್ಧಾರ ಮಾಡಿದ್ವಿ.

ಅಣ್ಣನ ಕಾರ್ ಸಹ ಆ ದಿನ ಮನೆಯಲ್ಲೇ ಇದ್ದುದ್ದರಿಂದ ನಮಗೆ ವಾಹನದ ತೊಂದರೆ ಆಗಲಿಲ್ಲ. ಎಲ್ಲರೂ ಬೇಳಿಗ್ಗೆ ಬೇಗನೆ ಎದ್ದು ರೇಡಿ ಆದೆವು. ಮನೆಯಲ್ಲೆ ಟೀಫಿನ್ ತಯಾರಿ ಮಾಡಿ ಜೋತೆಗೆ ಕುಡಿಯಲು ನೀರು ತೆಗೆದುಕೊಂಡು ಮನೆಯಿಂದ ಹೊರಟ್ವಿ

ಬೇಳಗ್ಗಿನಜಾವದ ವಾತಾವರಣ ತುಂಬಾ ಚನ್ನಾಗಿ ಇರುತ್ತೆ ಅಲ್ವಾ..? ಕಾರ್ ನಲ್ಲಿ ಹೋಗ್ತಾ ಇದ್ರೆ ತಂಪಾದ ಗಾಳಿ ಬೀಸುತ್ತಾ ಇತ್ತು. ಬೇಳಿಗ್ಗೆ ಏನೂ ತಿಂಡಿ ಬೇರೆ ತಿಂದಿಲ್ಲ ,ಈವಾಗ ಎಲ್ಲರಿಗೂ ಹೊಟ್ಟೆ ಬೇರೆ ತಾಳಹಾಕುತ್ತಾ ಇತ್ತು ಹಸಿವೇನ ತಡಿಯೋಕೆ ಆಗ್ತಾ ಇರಲಿಲ್ಲ ,ಹಾಗೆ ಹೋಗುವಾಗ ರಸ್ತೆ ಪಕ್ಕದಲ್ಲಿ ಇರುವ ತುಂಬಾ ಪ್ರಸಿದ್ದಿಯಾದ ದಾವಣಗೇರಿ ಬೇಣ್ಣೆ ಹೊಟೇಲ್ ಇದೆ ಅಂತ ಮೊದಲೇ ಗೋತ್ತಿತ್ತು. ಅದರ ಹತ್ತಿರ ನಮ್ಮಕಾರ್ ನಿಲ್ಲಿಸಿ ಎಲ್ಲರೂ ಬೇಣ್ಣೆ ದೋಸೆಯನ್ನು ಸವಿದೆವು ಮತ್ತೆ ಕಾರ್ ನಲ್ಲಿ ಕುತ್ಕೊಂಡು ಮ್ವೆಸೂರ್ ಕಡೆ ಹೊರಟ್ವಿ.

ಹೋಗುವಾಗ ದಾರಿಯಲ್ಲಿ ಶ್ರಿರಂಗಪಟ್ಟಣ ನೋಡಿಕೊಂಡು ಒಂದಿಷ್ಟು ಫೋಟೋ ತೆಗೆದು ಮುಂದೆ ನಡೆದ್ವಿ. ಅಲ್ಲೆ ಇರುವ ಟಿಪ್ಪು ಸುಲ್ತಾನರ ಸಮಾಧಿ ನೋಡಿ ಹಾಗೆ ಮುಂದೆ ನಡದರೆ ಮೈಸೂರ್.

ಮೈಸೂರ್
ಇವಾಗ ಮ್ವೆಸೂರ್ ತಲುಪಿ ಆಯ್ತು.........!!!!!!!!!

ಮೊದಲು ನೋಡಲು ಹೋಗಿದ್ದು ಪಕ್ಷಿಧಾಮವನ್ನ.........
ವ್ಹಾ!!!.........



ಎಲ್ಲಿ ನೋಡಿದರು ಪಕ್ಷಿಗಳ ಚಿಲಿಪಿಲಿ ಗಾಯನ, ಹಾಗೆ ಒಳಗಡೆ ಹೋಗಿ ಬೋಟಿಂಗ್ ಟೀಕೆಟ್ ತೆಗೆದುಕೊಂಡು ಬೋಟ್ ನಲ್ಲಿ ಒಂದು ಸುತ್ತು ಹಾಕಲು ಹೊರಟಾಯ್ತು, ಮೋಸಳೆಗಳು , ಎಲ್ಲಿಂದಲೋ ವಲಸೆಬಂದ ವಿಧವಿಧವಾದ ಪಕ್ಷಿಗಳು . ಇದನ್ನೇಲ್ಲಾ ನೋಡಿ ತುಂಬಾನೆ ಖುಷಿಯಾಗಿ ಅಲ್ಲಿಂದ ಪಯಣವನ್ನ ಬಲಮುರಿಗೆ ಬೆಳಸಿದ್ವಿ. ಅಲ್ಲಿ ನೀರಿನಲ್ಲಿ ಅರ್ದ ಗಂಟೆಗೂ ಹೆಚ್ಚು ಸಮಯವನ್ನೂ ಕಳೆದ್ವಿ ಅಲ್ಲೆ ಬೇಲಪುರಿ ಪಾನಿಪುರಿ ತಿಂದು ಮುಂದೆ ಪ್ರಯಾಣ ಮಾಡಿದ್ವಿ.




ಈವಾಗ ಪಯಣವನ್ನ ಮೃಗಾಲಕ್ಕೆ ಬೇಳೆಸಿದ್ವಿ

ಮೃಗಾಲಯದೋಳಗೆ ಹೋಗುವಾಗ ನಮಗೆ ಬೇಕಾದ ತಿಂಡಿ ತಿನಿಸುಗಳನ್ನ ತೇಗೆದುಕೊಂಡು ಒಳಗಡೆ ಪ್ರವೇಶ ಮಾಡಿ ಅಲ್ಲೆ ಪಕ್ಕ ಇರುವ ಚಿಕ್ಕ ಪಾರ್ಕನಲ್ಲಿ ಕುಳಿತು ಎಲ್ಲರೂ ತಂದಿರುವ ನಾನಾಬಗೆಯ ತಿಂಡಿ ತಿನಿಸುಗಳನ್ನ ತಿಂದು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಪ್ರಾಣಿಗಳ ನೋಡಲು ಕುತೂಹಲದಿಂದ ಮುಂದೆ ಸಾಗಿದ್ವಿ

ಆಕಾಶ ಎತ್ತರದ ಜೀರಾಫೆ ನಮ್ಮ ಎದುರಲ್ಲಿ !!! ಅದರ ಮುಂದೆ ನಿಂತು ನಮ್ಮವರೆಲ್ಲಾ ಸೇರಿ ಒಬ್ಬೋಬ್ಬರಾಗಿ ಪೋಟೋ ತೇಗೆಸಿಕೊಂಡು ಮುಂದೆ ಸಾಗುತ್ತಾ ನಡೆದ್ವಿ


ಸಾವಿರ ಜಾತಿಯ ಪಕ್ಷಿಗಳು!! ಅದರ ಮುಂದೆ ನಾವೆಲ್ಲಾ ಮೂಖವಿಸ್ಮಿತರಾದೆವು. ಅದನ್ನೆಲ್ಲಾ ನಮ್ಮ ಕ್ಯಾಮರಾದಲ್ಲಿ ಸೇರೆಹಿಡಿದುಕೊಂಡಾಯಿತು.


ಮೃಗಾಲಯದ ರಾಜನ ದರ್ಶನವಾಗುತ್ತಿದ್ದಂತೆ ಏನೋ ಒಂದು ರೀತಿ ಭಯ ಕುತೂಹಲ.... ಸಿಂಹ,ಹುಲಿ,ಚಿರತೆ,ಜಿಂಕೆ,ಕರಡಿ,ಮಂಗ,ಚಿಂಪಾಂಜಿ,ಕಾಡುಮೃಗ,ನರಿ,ನಾಯಿ,ಕುದರೆ,ಓಂಟೆ,ಹಂದಿ,ಅಯ್ಯೋ!!!!!ಹೇಳೋಕೆ ಸಾಕಾಗಲ್ಲ ಅಷ್ಟೊಂದು ಪ್ರಾಣಿಗಳು ಎಲ್ಲವನ್ನೂ ನೋಡಿ ಆನಂದಿಸುತ್ತಾ ಮುಂದೆ ಮುಂದೆ ಸಾಗುತ್ತಾ ನಡೆದೆವು.ನಮ್ಮೆದುರಿಗೆ ಈಗ ಕಾಣಿಸಿದ್ದು ದೊಡ್ಡ ಗಾತ್ತದ ಆನೆಗಳು ನಾನಾ ವಿಧದ ಆನೆಗಳು ಕಣ್ಣುತುಂಬಾ ನೋಡಿ ಖುಷಿಪಟ್ಟೆವು.

ಆಗಲೇ ಸ್ವಲ್ಪ ಸುಸ್ತಾಗಿ ಅಲ್ಲೆ ಒಳಗಡೆ ಇರುವ ಕ್ಯಾಂಟಿನ್ ನಲ್ಲಿ ಸ್ವಲ್ಪ ಟೀ ತಿಂಡಿ ಮುಗಿಸಿ ಹೋರಗಡೆ ಬರುವ ದಾರಿ ಕಡೆ ಹೆಜ್ಜೆ ಹಾಕುತ್ತಾ ಹಾವು ಮೋಸಳೆ ಎಲ್ಲವನ್ನೂ ನೋಡುತ್ತಾ ,,,, ನಮ್ಮ ಕಾರ್ ಇದ್ದಲ್ಲಿಗೆ ಬಂದು ಕಾರ್ ತೆಗೆದುಕೊಂಡು ಅರಮನೆ ಕಡೆ ಪ್ರಯಾಣ ಬೇಳಸಿ ಆಯ್ತು.

ಆ ದಿನ ಬೇರೆ ದಸರಾ ಅಲ್ಲಿಗೆ ಮುಟ್ಟುವುದರೋಳಗೆ ಸಂಜೆ ಆಗಿತ್ತು ಅಲ್ಲಿ ಕೇಲವು ಕಾರ್ಯಕ್ರಮಗಳು ನಡಿತಿದ್ದವು. ಅದರಲ್ಲೆ ಒಳಗಡೆ ನಡೆದು ನಮ್ಮ ನಮ್ಮ ಫೋಟೋ ತೆಗೆಸಿಕೊಂಡು ಅರಮನೆಯನ್ನು ನೋಡಿ ಕೆ.ಆರ್.ಎಸ್ ನೋಡಲು ಆತುರದಿಂದ ಕಾರ್ ತೆಗೆದುಕೊಂಡು ಹೊರಟ್ವಿ.

ಕೆ.ಆರ್.ಎಸ್ ನಾವು ಹೋಗಿ ಮುಟ್ಟಿದ ಸಮಯ ತುಂಬಾ ಆಭಾವವಾಗಿತ್ತು,ಒಳಗಡೆ ಪ್ರವೇಶ ಮಾಡಿ ಸೇತುವೆಯ ಮೇಲೆ ನಡೆದುಕೊಂಡು ಮ್ಯೂಸೀಕಲ್ ಕಾರಂಜಿ ನೋಡಲು ಒಡುತ್ತಾ ಒಡುತ್ತಾ ಒಳಗಡೆ ನಡೆದ್ವಿ.
ಎಲ್ಲೋ ಸ್ವರ್ಗಕ್ಕೆ ಬಂದ ಅನುಭವ ಎಲ್ಲಾ ಕಡೆ ತುಂಬಾನೆ ವರ್ಣರಂಜಿತವಾದ ಲ್ವೇಟ್ ಗಳ ಅಲಂಕಾರ ಅದರಮಧ್ಯೆ ಸಂಗೀತಕ್ಕೆ ತಕ್ಕಂತೆ ಕಾರಂಜಿಯ ನರ್ತನ ಇದು ನಮ್ಮನ್ನು ಒಂದು ಸಲ ಕುಣಿದುಕುಪ್ಪಳಿಸುವಂತೆ ಮಾಡಿತು ನಮ್ಮಗೆಲ್ಲಾ ತುಂಬಾನೆ ಸಂತೋಷವಾಗಿತ್ತು.

ಈಗ ಆಗಲೇ ತುಂಬಾ ವೇಳೆ ಆಗಿತ್ತು ಮನೆಗೆ ಹೋರಟು ಬರಬೇಕು ಹಸಿವು ಬೇರೆ ಆಗಿತ್ತು. ಅಲ್ಲೆ ಹೋರಗಡೆ ಬಂದು ಎಲ್ಲರೂ ಸೇರಿ ಊಟ ಮುಗಿಸಿ ಕಾರ್ ನಲ್ಲಿ ಕುಳಿತು ಮತ್ತೆ ಬೆಂಗಳೂರ್ ಕಡೆ ಪ್ರಯಾಣ ಬೇಳೆಸಿ ಮನೆಗೆ ಬಂದು ತಲುಪಲು ಮಧ್ಯ ರಾತ್ರಿ ಆಗಿತ್ತು

ನಮ್ಮ ಪ್ರಯಾಣದ ಅನುಭವದ ನೆನಪು ಮತ್ತೆ ಮತ್ತೆ ನೆನಪಾಗುತ್ತಾನೆ ಇದೆ.............

Friday, January 4, 2013

ನೆನಪು



ನೆನಪು

























ಮುಂಸ್ಸಜೆ ಸಮಯದಲ್ಲಿ ಸಾಗರದ ದಡದಲ್ಲಿ ಕುಳಿತ್ತಿದ್ದೆ
ಅಲೆಗಳ ಶಬ್ದಕ್ಕೆ ಸಂಗೀತ ಕೇಳಿದಾ ಅನುಭವ
ಶೃತಿ ತಾಳ ತಪ್ಪದೆ ಹಾಡು ಹಾಡುವ ರೀತಿಯಲ್ಲಿ
ಅಲೆಗಳ ಬಡಿತಾ ಕೇಳಿ ಬರುತಿತ್ತು
ಕುಳಿತಲೇ ಕುಳಿತು ಸೂರ್ಯ ಮುಳುಗುವುದು

 ಕಂಡರೇ ಏನೋ ಸಂತೋಷ
ಆಗ ನಿನ್ನ ನೆನಪಾಗಿ ಕಣ್ಣಲ್ಲಿ ನೀರು ತುಂಬಿ ಬಂತು
ದುಃಖ ತಡೆಯಲಾಗದೆ ತುಂಬ ನೊಂದೆ
ನಿನ್ನ ನೆನಪು ಕಣ್ಣನಲ್ಲಿ ನೀರಾಗಿ ಸಾಗರ ಸೇರಿದೆ
ನಿನ್ನ ನೆನಪಿನಲೇ ಕಾಯುತ್ತಿರುವೆ ಗೆಳಯಾ.........................






ನಿನ್ನ ನೆನಪು

ನಿನ್ನ ನೆನಪು















ಸಂಜೆ ಸೂರ್ಯನು ಭಾನಲಿ
ಬಣ್ಣಗಳ ಚಿತ್ತಾರ ಬರೆದಾಗ
ತಂಗಾಳಿಯ ಸುಳಿಯೊಂದು
ಚಳಿಯ ಕಚಗುಳಿಯಿಟ್ಟಾಗ
ಸಂಜೆ ಮಲ್ಲಿಗೆ ಹೂ
ಅರೆಬಿರಿದು ನಕ್ಕಾಗ
ಮತ್ತೆ ಮನದಿ ನುಸುಳುವುದು
ನಿನ್ನ ನೆನಪು
ಮುಗುಳ್ನಗುವಾಗಿ ಮರುಕಳಿಸುವುದು
ನಿನ್ನ ನೆನಪು

ಇಬ್ಬನಿ ..


ಇಬ್ಬನಿ ..


ಚೆಳಿಗಾಲ ಶುರುವಾದಂತೆ ನೀನು
 ಬಂದೆ ಬರುವೆ ನೀ ಯಾರೇ?

ಬೆಳಗಿನ ಜಾವದಲ್ಲಿ 
ಎಲ್ಲಾ ಕಡೆ ನೀನೇ ನೀ ಯಾರೇ?
 
ಎಲೆಗಳ ಮೇಲೆ ಹೂಗಳ ಒಳಗೆ 
ನೀನೇ ನೀ ಯಾರೇ?

ಬೆಳಗ್ಗೆನ ಜಾವ ಸೂರ್ಯೋದಯ ಆಗುವಾ ಮೂದಲೇ 
ನೀ ಬಂದೆ ಬರುವೆ ನೀ ಯಾರೇ?

ಸೂರ್ಯನು ಉದಯಿಸಿದೂಡನೆ ಹೋರಟು ಹೋಗುವೆ ನೀ ಯಾರೇ


 ನಾನೇ ಆ ಇಬ್ಬನಿ ..