Thursday, February 28, 2013

ಮನಸ್ಸಿನ ನೋವಿನ ಪ್ರೀತಿ


ನಾಳೆ ಎಂಬುದು ಕಷ್ಟ
ಇಂದು ಬಂದಿದೆ ಸುಖ
ಕಷ್ಟ-ಸುಖಗಳ ನಡುವೆ ಸೇರಿಸಲೇಕೆ

ಕಾಣದಿಹ ದಾರಿಯಲಿ
ಮುಂದುವರೆಯದ ಪ್ರೀತಿಗೆ
ನೆನೆಯುತ ನೀ ಮರುಗಲೇಕೆ

ಸರಳತೆಯ ದಾರಿಯಲಿ
ಪ್ರೀತಿಯ ಚಿಂತೆಯಲಿ ಕೂರಬೇಡ
ಆ ಹುಟ್ಟದ ಪ್ರೀತಿಯನ್ನು ಬಿಟ್ಟುಬೀಡು

ನಾಳೆ ಬರುವ ದುಃಖಕ್ಕೆ
ಇಂದು ಮರುಗ ಬೇಡ
ಇಂದಿನ ದಿನಕ್ಕೆ ನಾಳೆ ಎಂಬ
ಭಾವನೆ ಬೆರೆಸಲೇಕೆ

ಈಗ ನಗುತಿರಲು
ಇಂದು ಸುಖವಿರಲು
ಸಂತೋಷ ಉಕ್ಕಿರಲು
ಬಾಳು ಬೆಳಗುವುದೆಂದು ಮರೆಯಲೇಕೆ

ಕನಸಿನ ಪ್ರೀತಿಯ
ಬೆಂಕಿಯಲಿ ದಹಿಸಲು
ಮೂಡದ ಆ ಪ್ರೀತಿಗೆ ಕಾಯಬೇಡ
ಮನಸ್ಸನು ಸಮಧಾನಪಡಸಲೇಕೆ


Wednesday, February 20, 2013

ಮರೆಯಲಾಗದ ನೆನಪು

ಮರೆಯಾಗದ ನೆನಪೆ
ಏಕೆ ಸದಾ ಕಾಡುತ್ತಿರುವೆ
ಹಗಲು ರಾತ್ರಿ
ನಿನ್ನ ನೆನದು ಕನವರಿಸುತ್ತಿರುವೆ



ಆ ದಿನ ನೆನಪಾಗುತ್ತಿದೆ
ಚಂದ್ರನು ನಾಚಿ ಮೋಡದ ಹಿಂದೆ
ಮರೆಯಾಗುತ್ತಿದ್ದ.....................
ನಮ್ಮ ಆ ಪ್ರೇಮವನ್ನು ನೋಡಿ

ಆ ದಿನ ನಾ ಬರುವಿಕೆಗೆ ನೀ ಕಾದ್ದಿದೆ
ನಾ ತಡವಾಗಿ ಬಂದ ಕ್ಷಣಗಳು
ನೀ ಕಾದು ಬೇಸರಗೊಂಡಿದ್ದು, ಮತ್ತೆ
ನನ್ನ ನೋಡಿ ನಿನ್ನ ಮನಸ್ಸು ಉಲ್ಲಾಸಗೊಂಡು
ಮುಗುಳು ನಗೆ ಬಿರಿದ್ದು...........................

ಆ ನಗರದ ಬೀದಿ ದೀಪಗಳ ಬೆಳಕಿನಲ್ಲಿ
ಕೈ ಕೈ ಹಿಡಿದು ಸುತ್ತಿದ್ದು, ಆ ಸುಂದರ
ಉದ್ಯಾನದಲ್ಲಿ ಮೈ ಮರೆತ ಘಳಿಗೆ
ಯಾವ ಕವಿಯು ವರ್ಣನೆ ಮಾಡಲಾರ
ನಮ್ಮ ಮಧುರ ಮಿಲನದ ಕವನ

Friday, February 8, 2013

ನಿನ್ನ ನೆನಪು



ಏನೀ ಕಾತರ
ಏನೀ ಸಡಗರ
ನಿನ್ನ ಆಗಮನಕ್ಕೆ
ಈ ಸಂಭ್ರಮ,

ನಿನ್ನ ಕಂಡೊಡನೆ
ನೇಸರನ್ನು ನಾಚುವಂತೆ
ಕಾಣುತ್ತಿತ್ತು ನಿನ್ನ ಮೈಕಟ್ಟು,
ತಿಂಗಳಿಗೊಮ್ಮೆ ನೀ
ಬಂದೆ ಬರುವೇ
ನಿನ್ನ ಅಂದವಾ ನೋಡಿ
ನಾಚಿಕೆಯ ಮಂಜು
ತೆರೆಯ ಮುಚ್ಚಿಸಿದಂತೆ, 

 
 








ನಿನ್ನ ತುಂಟಿಯ ರಂಗು
ನನ್ನ ಮನದಲ್ಲಿ
ಗುಂಗುನ್ನು ಎಬ್ಬಿಸಿತು
ಸಿಹಿ ಮುತ್ತು ನೀಡುವ ಬಯಕೆ,
ನೀ ಸನಿಹ ಬಂದಷ್ಟು
ಮನಸ್ಸಿನಲ್ಲಿ ತುಂಬಿದ
ಆಸೆ ಮೈ ಮರಿಸಿತು
ಬಾಚಿ ಬಿಗಿದಪ್ಪುವ ಆಸೆ

 
 






ನೀ ತುಂಬ ಎತ್ತರದಲ್ಲಿ ಇರುವೇ
ನಿನ್ನ ನೋಡಲು ತಿಂಗಳು ಕಾಯಬೇಕು
ನೀ ಬಂದೆ ಬರುವೇ ಹುಣ್ಣಿಮೆಯ ದಿನದಂದ್ದು,
ಹುಣ್ಣಿಮಯ ರಾತ್ರಿಯಲ್ಲಿ ಬೆಳದಿಂಗಳ
ಊಟ ಮಾಡಿಸಿ ನಿನ್ನ ಆಲಿಂಗನದಲ್ಲಿ
ಮೈ ಮರಿಯುವ ಆಸೆ
ನೀ ಬರುವ ಸಂಭ್ರಮಕ್ಕೆ ಕಾಯುತ್ತಿರುವೇ.......................

Tuesday, February 5, 2013

ನನ್ನಿಂದಾದ ಅನಾಹುತ




                                  
 ಒಂದು ದಿನ  ಅತ್ತೆ ವಾಂಕಿಂಗ್ ಗೆ ಅಂತ  ಸಂಜೆಯ ವೇಳೆ ಹೊರ ನಡೆದರು.ಆ ದಿನ ಅವರು ಬರುವುದು ತಡವಾಯಿಗತು ಮನೆಗೆ  ವಾಪಸ್ ಬಂದ ತಕ್ಷಣ ಅತ್ತೆ ನನನ್ನು ಕರೆದು ಸಿಹಿ ಮಾಡಲು ತಿಳಿಸಿದರು. ನಾನು ಕಾರಣ  ಕೇಳಿದೆ , ಅತ್ತೆ ನೀನು ಮೊದಲು ಸಿಹಿ ಮಾಡು, ನಂತರ ವಿಷಯ ತಿಳುಸುವುದಾಗಿ ಹೇಳಿ ಅತ್ತೆ ಬಾಗಿಲಲೇ ಮಗನಿಗಾಗಿ ಕಾಯುತೊಡಗಿದರು.  ಮಗ ಬಂದ ತಕ್ಷಣ ಕೈ ಕಾಲು ಮುಖ ತೊಳೆದು ಬಾ, ನಿನಗೆ ಸಿಹಿ ತಿನ್ನಿಸಬೇಕು  ಎಂದು  ಹೇಳಿ ಸಿಹಿ ತರಲು ಒಳ ನಡೆದರು.  ಮಗ ರೆಡಿಯಾಗಿ ಬಂದ. ಅತ್ತೆ ಮಗನಿಗೆ ಸಿಹಿಕೊಟ್ಟು, ಇವತ್ತು ನಮ್ಮ ಬೀದಿಯಲೇ ವಾಂಕಿಂಗ್  ಹೋಗಿದ್ದೆ. ಎಲ್ಲಾರು ನಿಮ್ಮ ಸೊಸೆಯೆಂದ ತಕ್ಷಣ ನಾನು ಸುಮ್ಮನಿರದೇ ಏನು ಎಂದೆ. ಸೊಸೆ ಯಾರ ಜೊತೆ ಸೇರಲ್ಲ, ಸೊಸೆ ಸರಿಯಿಲ್ಲಾ ಎಂದು ಹೇಳಿದರೆ,  ನೀವು ಬಿಟ್ಟರೆ ತಾನೆ ನಾನು ಎಲ್ಲಾರ ಜೊತೆ ಸೇರೊದ್ದು ಕೋಪಗೊಂಡು ಒಳ ನಡೆದೆ. ಅತ್ತೆ ಬೇಸರವಾಗಿ ನಮ್ಮ ಬೀದಿಯಲ್ಲಿ ಎಲ್ಲಾರು ಹೇಳುತ್ತಿದ್ದರು ನಿಮ್ಮ ಸೊಸೆ ಎಷ್ಷು ಸರಳ, ದೊಡ್ಡವರು ಎಂದರೇ ಏನ್ನು ಗೌವರವ ಒಳ್ಳೆಯ ಸೊಸೆಯನ್ನು ತಂದಿರುವೇ ಅಂದರೂ ಆ ಖುಷಿಗೆ ಈ ಸಿಹಿ ಎಂದು ಹೇಳುತ್ತಾರೆ. ಅಲ್ಲೇ ಕಂದ್ದು ಕೇಳುತ್ತಿದ್ದ ನಾನು ಅತ್ತೆಗೆ ಕ್ಷಮೆ ಕೇಳಿದೆ ಆದರೂ ಅತ್ತೆಗೆ ನನ್ನ ಮಾತಿನಿಂದ ಬೇಸರಗೋಡರು.  ತಿಳಿಯದೇ ಮಾತಡಿದ ತಪ್ಪಿಗೆ, ತಾಳ್ಮೆ ಇಲ್ಲದೇ ಇದ್ದರೆ ಎಷ್ಷುಯಲ್ಲಾ ಅನಾಹುತ ನೋಡಿ ಇಬ್ಬರು ಮನಸ್ಸಿಗೂ ನೋವುಂಟಾಯಿತು.........................................................................................

ಮೋಸ ಹೋದ ಯುವತಿ 


 

ಫೇಸ್ ಬುಕ್ ಎನ್ನುವುದು ಎಂಥ ಮಾಯೆ!  ಅದು ಎಂಥವರನ್ನೂ ಮರುಳು ಮಾಡುತ್ತೆ , ಒಬ್ಬ ಯುವತಿಗೆ ಫೇಸ್ ಬುಕ್ ನಲ್ಲಿ ಒಬ್ಬ ಹುಡಗನ ಪರಿಚಯ ಆಗುತ್ತೆ. ಅವನು ಅವಳ ಜತೆ ತುಂಬ ಒಳ್ಳೆಯ ರೀತಿಯಲೇ ಇರುತ್ತಾನೆ. ಇಬ್ಬರೂ ಒಬ್ಬರಿಗೊಬ್ಬರು ಪೋನ್ ನಂಬರ್ ವಿನಿಮಯ ಮಾಡಿಕೋಳ್ಳುತ್ತಾರೆ. ಸ್ವಲ್ಪ ದಿನಗಳ ನಂತರ ಹುಡಗ ಯುವತಿಗೆ ಪೋನ್ ಮಾಡಿ ಅಂಕೌಟ್ ಗೆ ದುಡ್ಡು ಹಾಕಲು ಹೇಳುತ್ತಾನೆ. ಕಾರಣ ಕೇಳಿದರೆ ಮುಂದೆ  ಹೇಳುವುದಾಗಿ ತಿಳಿಸುತ್ತಾನೆ, ಅದನ್ನು ನಂಬಿದ ಯುವತಿ ಅವಳ ಹತ್ತಿರ ದುಡ್ಡು ಇಲ್ಲದೇ ಇದ್ದರೂ  ಚಿನ್ನ ಗಿರಿವಿ ಇಟ್ಟು  ಅಂಕೌಟ್ ಗೆ ಹಣ ಹಾಕುತ್ತಾಳೆ.




 ಕೆಲ ದಿನಗಳತನಕ ಆ ಹುಡುಗನ ಸುದ್ದಿಯೇ ಇರುವುದಿಲ್ಲ, ಯುವತಿನೇ ಪೋನ್ ಮಾಡಿದರು ಪೋನ್ ತೆಗೆಯುವುದಿಲ್ಲ. ಎಸ್ ಎಮ್ ಎಸ್ ಮಾಡಿದರು ಉತ್ತರಿಸುವುದಿಲ್ಲ. ಸ್ವಲ್ಪದಿನದ ನಂತರ ಪೋನ್ ಮಾಡುತ್ತಾನೆ ನನಗೆ ಆರೋಗ್ಯ ಸರಿಯಿರುವುದಿಲ್ಲ ಎಂಬುದಾಗಿ ತಿಳುಸುತ್ತಾನೆ ಭಯಪಟ್ಟ ಯುವತಿ ಏನೂ ಆಯಿತ್ತು ಎಂದು ಕೇಳುತ್ತಾಳೆ ನನಗೆ ಬ್ರೈನ್ ಟ್ಯೊಮರ್ ಎಂದು ತಿಳುಸುತ್ತಾನೆ ಅದನ್ನು ಕೇಳಿದ ಯುವತಿ ದುಃಖಪಡುತ್ತಾಳೆ ಅವನಿಗೆ ಸಮಾಧಾನ ಮಾಡುತ್ತಾಳೆ. ಹಾಗೇ ಸ್ವಲ್ಪದಿನದ ನಂತರ ಮತ್ತೆ ಅಂಕೌಟ್ ಗೆ ದುಡ್ಡು ಹಾಕುವುದಾಗಿ ಹೇಳುತ್ತಾನೆ ಕಾರಣ ಕೇಳದೇ ಹಾಕುತ್ತಾಳೆ. ಮತ್ತೆ ಪೋನ್ ಇಲ್ಲ ಎಸ್ ಎಮ್ ಎಸ್ ಇಲ್ಲ ಯುವತಿ ಎಷ್ಟು ಪ್ರಯತ್ನಪಟ್ಟರು ಆ ಕಡೆಯಿಂದ ಯಾವುದೇ ಉತ್ತರ ಬರುವುದಿಲ್ಲ. ನೋಂದ ಯುವತಿ ಸುಮ್ಮೆನೆ ಆಗುತ್ತಾಳೆ, ಮತ್ತೆ ಸ್ವಲ್ಪದಿನದ ನಂತರ ಆ ಕಡೆಯಿಂದ ಪೋನ್ ದುಡ್ಡಿಗಾಗಿ ಮತ್ತೆ ಕಾರಣ ಹೇಳದೇ ದುಡ್ಡು ಕೋಡುವುದಿಲ್ಲ ಎನ್ನುತ್ತಾಳೆ ಅದನ್ನು ಕೇಳಿದ ಅವನು ಪೋನ್ ಇಟ್ಟುಬಿಡುತ್ತಾನೆ. ಯುವತಿ ಪೋನ್ ಮಾಡಿ ಯಾಕೆ ಯಾವಗಲು ದುಡ್ಡು ನಿಮಗೆ ಎಂದು ಕೇಳಿದರೆ ನನ್ನ ಸಬಂಳ ಪೋರ್ತಿ ಅನಾಥ ಅಶ್ರಮಕ್ಕೆ ಹೋಗುತೆ ಅದಕ್ಕೆ ನಾನು ನಿನ್ನ ದುಡ್ಡು ಅನಾಥ ಅಶ್ರಮಕ್ಕೆ ಕೋಡುತ್ತಿದ್ದೆನೆ,ನಿಮ್ಮಗೂ ಒಳ್ಳೆಯದು ಆಗುವುದು ಎಂದು ತಿಳುಸುತ್ತಾನೆ ಅದನ್ನು ನಂಬಿ ಸುಮ್ಮನೆ ಆಗುತ್ತಾಳೆ. ಮತ್ತೆ ಯುವತಿ ಪೋನ್ ಮಾಡಿದರೆ ಆ ಕಡೆಯಿಂದ ಎಸ್ ಎಮ್ ಎಸ್ ಬರುತ್ತೆ ನೀನು ನನಗೆ ತೊಂದರೆ ಕೋಡುತ್ತಿದಿಯ ಮತ್ತೆ ಪೋನ್ ಎಸ್ ಎಮ್ ಎಸ್ ಮಾಡಬೇಡ ಎಂಬುದಾಗಿ ನೋಡಿ ದುಡ್ಡು ಕೋಡುವುದಿಲ್ಲ ಎಂದ ತಕ್ಷಣ ಹೇಗೆ ಮಾಡುತ್ತಾರೆ ಅವನಿಗೆ ಯಾವುದೇ ಕಾಯಿಲೇ ಇರುವುದಿಲ್ಲ ಯಾವುದೇ ಅನಾಥ ಅಶ್ರಮಕ್ಕೆ ದುಡ್ಡು ಕೊಡುವುದಿಲ್ಲ ಯುವತಿಗೆ ನಂಬಿಸಿ ಮೋಸಮಾಡಿ ದುಡ್ಡು ತಿನ್ನುತಿದ್ದ. ಇತರ ಜನ ಇರತ್ತಾರೆ ಇಗಲಾದರು ಎಚ್ಚುತ್ತುಕೊಳ್ಳಿ ಮೋಸ ಹೋಗೊರು ಇದ್ದರೆ ಮೋಸಮಾಡೊರು ಇದ್ದೆ ಇರತ್ತಾರೆ ಹುಷಾರು..........................................................................................................................!